ಯಕ್ಷಗಾನ ಕಲಾರಂಗ – ಕಲಾವಿದರ ಸಮಾವೇಶ 2025
ಪ್ರತಿವರ್ಷ ಕಲಾರಂಗ ಮೇ 31ರಂದು ನಡೆಸುವ ಕಲಾವಿದರ ಸಮಾವೇಶಕ್ಕೆ ಈವರ್ಷ ಸುವರ್ಣದ ಮೆರಗು. ಶ್ರೀಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ದಿನಪೂರ್ತಿ ಕಾರ್ಯಕ್ರಮವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನ ಗೊಂಡಿತು. ಅಪರಾಹ್ನದವರೆಗಿನ ಕಲಾಪಗಳು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಜರಗಿತು. ಬೆಳಿಗ್ಗೆ 10.00 ಗಂಟೆಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಗೋಪಾಲ. ಸಿ. ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಸ್ವಾಗತಿಸಿದರು. ಕಲಾರಂಗದ ಅಧ್ಯಕ್ಷ […]
ಯಕ್ಷಗಾನ ಕಲಾರಂಗ – ಕಲಾವಿದರ ಸಮಾವೇಶ 2025 Read More »