Yakshagana Kalaranga

Yakshagana Kalaranga

ವಿದ್ಯಾಪೋಷಕ್ 58ನೇ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ನ ತೃತೀಯ ಇಂಜಿನೀಯರ್ ವಿದ್ಯಾರ್ಥಿನಿ ಸೌಜನ್ಯ ಇವಳಿಗೆ ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಅವರ ಶಷ್ಠ್ಯಬ್ಧಪೂರ್ತಿ ಸಂದರ್ಭದಲ್ಲಿ ರೂ. 6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ವರಲಕ್ಷ್ಮೀ’ 07.12.2024 ರಂದು ಉದ್ಘಾಟನೆಗೊಂಡಿತು. ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಸಮಾಜದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಮಾಡುತ್ತಾ ಸಮತ್ವ ಭಾವದಿಂದ ನಡೆದರೆ ರಾಮರಾಜ್ಯ ನಿರ್ಮಾಣವಾಗುತ್ತದೆ. ಯಕ್ಷಗಾನ ಕಲಾರಂಗ ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ […]

ವಿದ್ಯಾಪೋಷಕ್ 58ನೇ ಮನೆ ಹಸ್ತಾಂತರ Read More »

ಕಿಶೋರ ಯಕ್ಷಗಾನ ಸಂಭ್ರಮ – 2024. ಬ್ರಹ್ಮಾವರ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ

ಕಿಶೋರ ಯಕ್ಷಗಾನ ಸಂಭ್ರಮ 2024 ಮಹಾಭಿಯಾನ 23.11.2024 ರಂದು ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು. ಉಡುಪಿ ಶಾಸಕರು, ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ರಘುರಾಮ ಮಧ್ಯಸ್ಥ,ಬೈಕಾಡಿ ಸುಪ್ರಸಾದ್ ಶೆಟ್ಟಿ,ಬಿ.ಭುಜಂಗ ಶೆಟ್ಟಿ, ಧನಂಜಯ ಅಮೀನ್,ಬಿ.ಎನ್.ಶಂಕರ ಪೂಜಾರಿ,ಮಾರಾಳಿ ಪ್ರತಾಪ್ ಹೆಗ್ಡೆ,ರಾಜೀವ್ ಕುಲಾಲ್, ನಿತ್ಯಾನಂದ ಬಿ.ಆರ್ ಭಾಗವಹಿಸಿದ ಸಮಾರಂಭದ ಆರಂಭದಲ್ಲಿ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣೇಶ್ ಬ್ರಹ್ಮಾವರ ನಿರ್ವಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್.ಶೃಂಗೇಶ್ವರ

ಕಿಶೋರ ಯಕ್ಷಗಾನ ಸಂಭ್ರಮ – 2024. ಬ್ರಹ್ಮಾವರ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ Read More »

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ – 2024

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ 17.11.2024 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು. ಯಕ್ಷಗಾನ ಲೋಕ ಶಿಕ್ಷಣವನ್ನು ಕೊಡುವ ಶ್ರೇಷ್ಠವಾದ ಕಲಾಪ್ರಕಾರವೆಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು ಆರ್.ಎಲ್ ಭಟ್- ವಾರಿಜಾಕ್ಷಿ ಆರ್ ಭಟ್ ಗೌರವಾರ್ಥ ಅವರ ಸುಪುತ್ರ ಹರಿಪ್ರಸಾದ್ ಭಟ್ ಪ್ರಾಯೋಜಿಸಿದ ಬಣ್ಣದ ಕೋಣೆಯನ್ನು ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭ – 2024 Read More »

ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ.

ವಿದ್ಯಾಪೋಷಕ್ ವಿದ್ಯಾರ್ಥಿನಿ ಸೌಜನ್ಯಾ (ತೃತೀಯ ಇಂಜಿನೀಯರ್) ಇವಳಿಗೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ನಿರ್ಮಿಸಲಿರುವ ಮನೆಗೆ 28-10-2024 ರಂದು ಶಿರ್ವದ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರು ಶಿಲಾನ್ಯಾಸಗೈದರು. ಇಂದು ಕೊಲ್ಲಬೆಟ್ಟು ರವೀಂದ್ರ ಶೆಟ್ಟಿಯವರಿಗೆ 60ನೇ ಹುಟ್ಟುಹಬ್ಬ ಹಾಗೂ ವಿವಾಹದ 30ನೇ ವರ್ಷವಾಗಿದ್ದು, ಇದನ್ನು ಓರ್ವ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಟ್ಟು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಿದ್ದು, ಇನ್ನೆರಡು ತಿಂಗಳಲ್ಲಿ ಈ ಮನೆಯನ್ನು ಪೂರ್ಣಗೊಳಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದರು.

ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ. Read More »

ಯಕ್ಷಗಾನ ಕಲಾರಂಗದ 57ನೆಯ ಮನೆಯ ಉದ್ಘಾಟನೆ.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿಯರಾದ ಪ್ರಥಮ ಬಿ. ಕಾಂ. ನ ಸಂಗೀತಾ ಹಾಗೂ ದ್ವಿತೀಯ ಪಿ.ಯು.ಸಿಯ ಸುಪ್ರೀತಾ ಇವರಿಗೆ ಬ್ರಹ್ಮಾವರ ತಾಲೂಕಿನ ಜಾನುವಾರುಕಟ್ಟೆಯಲ್ಲಿ ಶಾರದಾ ಮತ್ತು ಪಾಂಡೇಶ್ವರ ರಾಮರಾಯರ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳ ಪ್ರಾಯೋಜಕತ್ವದಲ್ಲಿ ರೂ.7ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಶಾರದಾರಾಮ 26.10.2024ರಂದು ಶಾರದಾ ಕಾರಂತರ 50ನೇ ಪುಣ್ಯತಿಥಿಯ ದಿನ ಉದ್ಘಾಟನೆಗೊಂಡಿತು. ಶಾರದಾ ರಾಮ ಕಾರಂತರ ಮಕ್ಕಳಾದ ಪಿ. ಗೋವಿಂದರಾಜ ಕಾರಂತ, ಪಿ. ವಾಸುದೇವ ಕಾರಂತ, ಜಯಲಕ್ಷ್ಮೀ ಉಪಾಧ್ಯ, ಸೀತಾಲಕ್ಷ್ಮೀ ಜಿ.ರಾವ್ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗದ 57ನೆಯ ಮನೆಯ ಉದ್ಘಾಟನೆ. Read More »

ಯಕ್ಷಗಾನ ಕಲಾರಂಗದ 56ನೆಯ ಮನೆಯ ಉದ್ಘಾಟನೆ.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿನಿ ದ್ವಿತೀಯ ಪಿ.ಯು.ಸಿ.ಯ ಸತ್ಯವತಿ ಇವಳಿಗೆ ಕುಂದಾಪುರ ತಾಲೂಕಿನ ಕೋಟೇಶ್ವರದ ಮೇಲ್ಕಟ್ಕೆರೆಯಲ್ಲಿ ವಿದ್ವಾನ್ ಪಂಜ ಭಾಸ್ಕರ ಭಟ್ ಅವರ ಪ್ರಾಯೋಜಕತ್ವದಲ್ಲಿ ರೂ.6 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ಚಂದ್ರಿಕಾ ನಿಲಯ 18.10.2024ರಂದು ಉದ್ಘಾಟನೆಗೊಂಡಿತು. ವೇ. ಮೂ ಕಡಂದಲೆ ಕೆ.ವಿ.ಕೃಷ್ಣ ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ವಿದ್ವಾನ್ ಪಂಜ ಭಾಸ್ಕರ ಭಟ್ – ಶ್ರೀಮತಿ ಚಂದ್ರಿಕಾ ಭಾಸ್ಕರ ಭಟ್ ದಂಪತಿಗಳು ಅವರ ಸುಪುತ್ರ ಶ್ರೀವತ್ಸ,ಸೊಸೆ ಕೌಸಲ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರದ ಶಾಸಕ

ಯಕ್ಷಗಾನ ಕಲಾರಂಗದ 56ನೆಯ ಮನೆಯ ಉದ್ಘಾಟನೆ. Read More »

ಯಕ್ಷಗಾನ ಕಲಾರಂಗದ 55ನೆಯ ಮನೆಯ ಉದ್ಘಾಟನೆ.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಪ್ರಥಮ ಪಿ.ಯು.ಸಿ.ಯ ಶ್ರೀನಿಧಿ ಹಾಗೂ ಪ್ರಥಮ ಬಿ.ಇ.ಯ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಶ್ರೀ ಪಣಂಬೂರು ವಾಸುದೇವ ಐತಾಳ್ ಇವರು ತಮ್ಮ 60ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪ್ರಾಯೋಜಿಸಿದ ನೂತನ ಮನೆ ‘ಕೃಪಾರಂಗ’ 12.10.2024ರಂದು ಉದ್ಘಾಟನೆಗೊಂಡಿತು. ಶ್ರೀ ಪಣಂಬೂರು ವಾಸುದೇವ ಐತಾಳ್ ಶ್ರೀಮತಿ ಮೀನಾಕ್ಷಿ ವಿ. ಐತಾಳ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರ ಸಹೋದರಿ ಶ್ರೀಮತಿ ಜಯಶ್ರೀ ಉಪಸ್ಥಿತರಿದ್ದರು. ಕಲಾರಂಗ ವಿಶ್ವಾಸಾರ್ಹತೆ ಮತ್ತು ಸಮಾಜ ಪ್ರೀತಿಯಿಂದ

ಯಕ್ಷಗಾನ ಕಲಾರಂಗದ 55ನೆಯ ಮನೆಯ ಉದ್ಘಾಟನೆ. Read More »

ವಿದ್ಯಾಪೋಷಕ್ 20ನೇ ವರ್ಷದ ವಿನಮ್ರ ಸಹಾಯಧನ ಕಾರ್ಯಕ್ರಮ – 2024

ವಿದ್ಯಾಪೋಷಕ್ 20ನೇ ವರ್ಷದ ವಿನಮ್ರ ಸಹಾಯ ಉದ್ಘಾಟನೆ. ಸೆಪ್ಟೆಂಬರ್ 29, 2024 ಭಾನುವಾರ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ 20ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಕಿರಿಯ ಸ್ವಾಮೀಜಿ ಶ್ರೀಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತರಿದ್ದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಶುಭಹಾರೈಸಿದರು. ಮಣಿಪಾಲ ಮಾಹೆಯ ಉಪಕುಲಪತಿಗಳಾದ ಲೆ. ಜ. (ಡಾ.) ಎಂ.

ವಿದ್ಯಾಪೋಷಕ್ 20ನೇ ವರ್ಷದ ವಿನಮ್ರ ಸಹಾಯಧನ ಕಾರ್ಯಕ್ರಮ – 2024 Read More »

ಮಲ್ಪೆಯ ಸ.ಪ.ಪೂ.ಕಾಲೇಜಿನಲ್ಲಿ ಯಕ್ಷಶಿಕ್ಷಣ ತರಬೇತಿ ಉದ್ಘಾಟನೆ

ಯಕ್ಷಶಿಕ್ಷಣ ಟ್ರಸ್ಟ್( ರಿ)ಉಡುಪಿ,ಇವರ ಸಹಕಾರದಿಂದ ಉಡುಪಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗುವ ಯಕ್ಷಗಾನ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಮಲ್ಪೆಯ ಸ.ಪ.ಪೂ.ಕಾಲೇಜಿನಲ್ಲಿ ಅಗಸ್ಟ್ 8 ರಂದು ನೆರವೇರಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಾನಿಗಳಾದ ಸುಜಿತ್ ಎಸ್. ಅಮೀನ್ ರವರು ನೆರವೇರಿಸಿದರು. ಯಕ್ಷಶಿಕ್ಷಣ ಟ್ರಸ್ಟ್ ನ ಸದಸ್ಯರಾದ ನಾರಾಯಣ ಎಂ.ಹೆಗಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮಹತ್ವವನ್ನು ತಿಳಿಸಿದರು.ಯಕ್ಷಗಾನ ಗುರುಗಳಾದ ಬಿ. ಕೇಶವ್ ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.ಇದೇ ಸಂದರ್ಭದಲ್ಲಿ ಸುಜಿತ್ ಎಸ್.ಅಮೀನ್ ರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ

ಮಲ್ಪೆಯ ಸ.ಪ.ಪೂ.ಕಾಲೇಜಿನಲ್ಲಿ ಯಕ್ಷಶಿಕ್ಷಣ ತರಬೇತಿ ಉದ್ಘಾಟನೆ Read More »

We're currently hard at work gathering information and crafting content to bring you the best experience. Stay tuned for exciting updates!