Yakshagana Kalaranga

ಯಕ್ಷಗಾನ ಕಲಾರಂಗ – ಕಲಾವಿದನ ಮನೆಗೆ ಶಿಲಾನ್ಯಾಸ

ಮಂದಾರ್ತಿ ಮೇಳದ ಚೆಂಡೆವಾದಕರಾದ ಸುರೇಶ್ ಆಚಾರ್ಯ,ಕನ್ನಾರ್ ಇವರಿಗೆ ಪೇತ್ರಿಯ ಆಚಾರ್ ಬೆಟ್ಟಿನಲ್ಲಿ,ಹೆಬ್ರಿಯ ಡಾ.ಭಾರ್ಗವಿ ಐತಾಳ್ ಇವರ ಪ್ರಾಯೋಜಕದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಮನೆಯ ಶಿಲಾನ್ಯಾಸವನ್ನು 20-4-2025 ರಂದು ಕೃಷಿತಜ್ಞರು, ಅರ್ಥಧಾರಿಯೂ ಆದ ಡಾ.ವೈಕುಂಠ ಹೇರ್ಳೆ ಅವರು ನೆರವೇರಿಸಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ರವರು ಮನೆ ನಿರ್ಮಿಸಲಿದ್ದು,ಇದೇ ಮೇ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ವೈದಿಕ ವಿದ್ವಾಂಸ ಹಾಗೂ ಸಂಸ್ಥೆಯ ಸದಸ್ಯರೂ ಆದ ಸೀತಾರಾಮ ಭಟ್,ಸಾಮಾಜಿಕ ಕಾರ್ಯಕರ್ತರಾದ ಕಮಲಾಕ್ಷ ಹೆಬ್ಬಾರ್,ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಸುರೇಶರ ಮಾತಾಪಿತರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!