



ಭೀಮ-ಯಕ್ಷಶಿಕ್ಷಣ ಸನಿವಾಸ ಶಿಬಿರದ ಮುಂದುವರಿದ ಭಾಗವಾಗಿ ಆಸಕ್ತ 18 ವಿದ್ಯಾರ್ಥಿಗಳಿಗೆ ನಾಲ್ಕು ದಿನಗಳ ಮುಖವರ್ಣಿಕೆ ಮತ್ತು ವೇಷ ಕಟ್ಟಿಕೊಳ್ಳುವ ಶಿಬಿರ 15-04-25 ರಂದು ಐವೈಸಿಯಲ್ಲಿ ಆರಂಭಗೊಂಡಿತು. ಗುರು ಬನ್ನಂಜೆ ಸುವರ್ಣರ ಮಾರ್ಗದರ್ಶನದಲ್ಲಿ ಮಿಥುನ್ ನಾಯಕ್ ಮತ್ತು ನರಸಿಂಹ ತುಂಗರು ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆಯ ಸೂಕ್ಷ್ಮವನ್ನು ತಿಳಿಸಿದರು.ಇದೇ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿದ್ದು, ಹವ್ಯಾಸಿ ಕಲಾವಿದರಾಗಿ,ಯು.ಕೆ.ಯಲ್ಲಿ ಯಕ್ಷಗಾನದ ರಾಯಭಾರಿಯಂತೆ ಕಾರ್ಯನಿರ್ವಹಿಸುತ್ತಿರುವ ಡಾ.ಗುರುಪ್ರಸಾದ್ ಪಟ್ವಾಲ್ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಮೆಚ್ಚಿ,ಸಂತಸ ವ್ಯಕ್ತಪಡಿಸಿದರು.