Yakshagana Kalaranga

ಯಕ್ಷ ಶಿಕ್ಷಣ ಸನಿವಾಸ ಶಿಬಿರ – 2025 ಸಮಾರೋಪ ಸಮಾರಂಭ

ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. – ಗಣಪತಿ ಕೆ.

ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ ಒಂದು ವಾರದ ಯಕ್ಷಗಾನ ತರಬೇತಿ ಸನಿವಾಸ ಶಿಬಿರದ ಸಮಾರೋಪ ಸಮಾರಂಭವು 28.03.2025 ರಂದುಜರಗಿತು. ಉಡುಪಿ ವಿದ್ಯಾಂಗ ಉಪನಿರ್ದೇಶಕರಾದ ಗಣಪತಿ ಕೆ. ಯವರು ಶುಭಾಶಂಸನೆಯ ಮಾತುಗಳನ್ನಾಡುತ್ತಾ ಮೇಲಿನಂತೆ ಉಲ್ಲೇಖಿಸಿದರು. ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ನಿಮ್ಮ ಮಕ್ಕಳನ್ನು ಸೀಮಿತಗೊಳಿಸದೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಆತ್ಮ ವಿಶ್ವಾಸ, ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವಂತೆ ಪಾಲಕರಿಗೆ ಕರೆಕೊಟ್ಟರು. ಪ್ರಮಾಣಪತ್ರ ವಿತರಿಸಿ ಮಾತನಾಡಿದ ಗೀತಾನಂದ ಫೌಂಡೇಶನ್ ಮಣೂರು ಇದರ ವರಿಷ್ಠರಾದ ಆನಂದ ಸಿ. ಕುಂದರ್ ಯಕ್ಷಗಾನ ಕಲಾರಂಗ ಕಲೆ, ಸಮಾಜಪರ ಕೆಲಸಗಳನ್ನು ಮಾಡುತ್ತಾ ಸಾರ್ವಜನಿಕರ ವಿಶ್ವಾಸವನ್ನು ಗಳಿಸಿದ ಪ್ರತಿಷ್ಠಿತ ಸಂಸ್ಥೆ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷರೂ ಆದ ಉಡುಪಿ ಶಾಸಕ ಶ್ರೀ ಯಶ್‍ಪಾಲ್ ಎ. ಸುವರ್ಣ ವಹಿಸಿದ್ದರು. ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆಯವರು ಶುಭಕೋರಿದರು. ಅಭ್ಯಾಗತರಾಗಿ ಯು. ವಿಶ್ವನಾಥ ಶೆಣೈ, ಡಾ. ಜಗದೀಶ ಶೆಟ್ಟಿ ಸಿದ್ದಾಪುರ, ಜಯ ಸಿ. ಕೋಟ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಬ್ರಹ್ಮಾವರ, ಡಾ. ಪ್ರಶಾಂತ್ ಶೆಟ್ಟಿ ಮಣಿಪಾಲ, ಶ್ರೀನಿವಾಸ ರಾವ್ ಹಿರಿಯಡಕ, ಶಿಬಿರದ ಪ್ರಾಯೋಜಕತ್ವವಹಿಸಿದ ಭೀಮ ಗೋಲ್ಡ್ ಪ್ರೈ. ಲಿ.ನ ಗುರುಪ್ರಸಾದ್ ಮತ್ತು ರಾಘವೇಂದ್ರ ಭಟ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕರಾದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಶಾಲು, ಸ್ಮರಣಿಕೆ ಫಲವಸ್ತು ನೀಡಿ ಸಮ್ಮಾನಿಸಲಾಯಿತು. ಶಿಬಿರದ ಶಿಕ್ಷಕರಾದ ನರಸಿಂಹ ತುಂಗ, ಆದ್ಯತಾ ಭಟ್ ಮತ್ತು ತರಬೇತಿಯಲ್ಲಿ ಸಹಕರಿಸಿದ ಸಂಜೀವ ಸುವರ್ಣರ ಶಿಷ್ಯ ವರ್ಗವನ್ನು ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಅಭ್ಯಾಗತರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ, ಪುಸ್ತಕಗಳನ್ನು ನೀಡಿದರು. ಶಿಬಿರದಲ್ಲಿ ನಡೆಸಿದ ಸ್ಪರ್ಧಾ ವಿಜೇತರಿಗೆ ಯು. ಎಸ್. ರಾಜಗೋಪಾಲ ಆಚಾರ್ಯರು ಬಹುಮಾನ ವಿತರಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್ ಹಾಗೂ ಸದಸ್ಯರಾದ ಸಂತೋಷ್ ಶೆಟ್ಟಿ, ವಿಜಯಕುಮಾರ್ ಮುದ್ರಾಡಿ, ಕೆ. ಆನಂದ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಸಂಯೋಜಕರಾದ ನಿರಂಜನ ಭಟ್ ಎಂ. ಸಂಸ್ಥೆಯ ಕಾರ್ಯಕರ್ತರಾದ ಪೃಥ್ವಿರಾಜ್ ಕವತ್ತಾರ್,ವಿದ್ಯಾಪ್ರಸಾದ್, ಗಣಪತಿ ಭಟ್, ಯು. ಅನಂತರಾಜ ಉಪಾಧ್ಯ, ವಿಶ್ವನಾಥ ಸಹಕರಿಸಿದರು. ಸಭಾಕಾರ್ಯಕ್ರಮದ ಮೊದಲು ಶಿಬಿರದಲ್ಲಿ ಪಾಲ್ಗೊಂಡ 60 ವಿದ್ಯಾರ್ಥಿಗಳು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಸುಂದರವಾಗಿ ಪ್ರಸ್ತುತಿಪಡಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!