Yakshagana Kalaranga

Past Events

ಶಿರ್ವದಲ್ಲಿ ಕಿಶೋರ ಯಕ್ಷಗಾನ ಸಮಾರೋಪ.

ಶಿರ್ವದ ಮಹಿಳಾ ಸೌಧದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್ ನ ಶಿರ್ವ ಪರಿಸರದ ಎಂಟು ಶಾಲೆಗಳ ಪ್ರದರ್ಶನ 29.12.2023ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ತನ್ನ ಆಶಯದಂತೆ ಕಾಪು ಕ್ಷೇತ್ರದ 15 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿ, ಪ್ರದರ್ಶನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಯಕ್ಷಶಿಕ್ಷಣ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು ಎಂದು ಹರ್ಷ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಎಂ. ಗಂಗಾಧರ ರಾವ್, ಮಟ್ಟಾರು ರತ್ನಾಕರ […]

ಶಿರ್ವದಲ್ಲಿ ಕಿಶೋರ ಯಕ್ಷಗಾನ ಸಮಾರೋಪ. Read More »

ಯಕ್ಷನಿಧಿ ಡೈರಿ – 2024 ಬಿಡುಗಡೆ

ಯಕ್ಷಗಾನ ಕಲಾರಂಗ (ರಿ.) ಉಡುಪಿ ಕಳೆದ ಎರಡು ದಶಕಗಳಿಂದ ವೃತ್ತಿ ಮೇಳದ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡಿರುವ ಡೈರಿ ನೀಡುತ್ತಾ ಬಂದಿದ್ದು, ‘ಯಕ್ಷನಿಧಿ ಡೈರಿ – 2024’ರ ಬಿಡುಗಡೆ ಕಾರ್ಯಕ್ರಮವು 27-12-2023 ರಂದು ಸಂಸ್ಥೆಯ ಕಚೇರಿಯಲ್ಲಿ ಜರಗಿತು. ಉಡುಪಿಯ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಗಣೇಶ್ ಕಾಂಚನ್ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕಡಂದೇಲು ಪುರುಷೋತ್ತಮ ಭಟ್‍ರ ಮಗ ಕೆ. ಸದಾಶಿ ಭಟ್ ಡೈರಿ ಬಿಡುಗಡೆ ಮಾಡಿದರು. ಸಂಸ್ಥೆಯ ಸಮಾಜಮುಖಿ ಕಾರ್ಯಗಳನ್ನು, ಕಲಾವಿದರ ಕ್ಷೇಮಚಿಂತನೆಗೆ ಮಾಡುತ್ತಿರುವ

ಯಕ್ಷನಿಧಿ ಡೈರಿ – 2024 ಬಿಡುಗಡೆ Read More »

ಯಕ್ಷಗಾನ ಕಲಿಕೆಗೆ ಪೂರಕ – ಪ್ರೊ. ವೈ. ಭಾಸ್ಕರ ಶೆಟ್ಟಿ

ಯಕ್ಷಗಾನದ ಕಲಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ, ಪುರಾಣಜ್ಞಾನ, ಭಾಷಾ ಕೌಶಲ, ಕಠಿಣ ಪರಿಶ್ರಮ ಪ್ರವೃತ್ತಿ, ಕ್ರಿಯಾಶೀಲತೆಯನ್ನು ಬೆಳೆಸುತ್ತದೆ. ಇದರಿಂದ ಸಹಜವಾಗಿಯೆ ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಾರೆ ಎಂದು ಎಂ. ಎಸ್. ಆರ್. ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೈ. ಭಾಸ್ಕರ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಕಿಶೋರ ಯಕ್ಷಸಂಭ್ರಮ – 2023 ಶಿರ್ವದ ಮಹಿಳಾ ಸೌಧದಲ್ಲಿ ನಡೆಯಲಿರುವ ನಾಲ್ಕು ದಿನಗಳ ಪ್ರದರ್ಶನವನ್ನು 25.12.2023ರಂದು ಉದ್ಘಾಟಿಸಿ ಮಾತನಾಡಿದರು. ಎಂ.

ಯಕ್ಷಗಾನ ಕಲಿಕೆಗೆ ಪೂರಕ – ಪ್ರೊ. ವೈ. ಭಾಸ್ಕರ ಶೆಟ್ಟಿ Read More »

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ – ‘ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರು ಅಭಿನಂದನೀಯರು’.ಪೇಜಾವರ ಶ್ರೀ.

ಉಡುಪಿ : ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ 18.11.2023 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.ಸಂಸ್ಕಾರ ನೀಡುವ, ಸಂಸ್ಕೃತಿ ಉಳಿಸುವ, ಶ್ರೀಮಂತ ಕಲೆ ಯಕ್ಷಗಾನದ ಕಲಾವಿದರ ತ್ಯಾಗ, ಶ್ರಮ ದೊಡ್ಡದು. ಅವರು ಸದಾ ಅಭಿನಂದನೀಯರು ಎಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಅಂತಹ ಕಲಾವಿದರನ್ನು ಗೌರವಿಸುವುದು ಸ್ತುತ್ಯರ್ಹ ಎಂದರು. ಕಲಾವಿದರಾದ ಚಿದಂಬರಬಾಬು , ಕೋಟ

ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ – ‘ಸಂಸ್ಕಾರ ನೀಡುವ ಯಕ್ಷಗಾನ ಕಲಾವಿದರು ಅಭಿನಂದನೀಯರು’.ಪೇಜಾವರ ಶ್ರೀ. Read More »

ಯಕ್ಷಗಾನ ಕಲಾರಂಗದ 50ನೇ ಮನೆಗೆ ಶಿಲಾನ್ಯಾಸ.

ಇಂದು (06.11.2023) ಕಾರ್ಕಳ ತಾ. ಹೊಸ್ಮಾರ್ ನೂರಳ್‍ಬೆಟ್ಟುವಿನಲ್ಲಿ ಯಕ್ಷಗಾನ ಕಲಾರಂಗ ನಿರ್ಮಿಸುವ 50ನೇ ಮನೆಗೆ ಶಿಲಾನ್ಯಾಸ ನೆರವೇರಿಸಲಾಯಿತು. ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ದಕ್ಷಿಣ ತುದಿಯಲ್ಲಿರುವ, ಅತ್ಯಂತ ಶಿಥಿಲವಾಗಿರುವ ಮನೆಯಲ್ಲಿ ವಾಸಿಸುತ್ತಿರುವ, ಪ್ರಥಮ ಪಿಯುಸಿಯ ಪ್ರತಿಭಾವಂತ ವಿದ್ಯಾಪೋಷಕ್ ವಿದ್ಯಾರ್ಥಿನಿ ಚೈತ್ರಾ (ಎಸ್.ಎಸ್.ಎಲ್.ಸಿ 95%) ಇವಳಿಗೆ ತಮ್ಮ ವೈವಾಹಿಕ ಜೀವನದ 50ನೇ ವರ್ಷದ ಶುಭಾವಸರದಲ್ಲಿ ಮನೆಯನ್ನು ಕಟ್ಟಿಕೊಡುವ ಮೂಲಕ ಸಮಾಜಮುಖಿಯಾಗಿ ಆಚರಿಸಲು ಸಂಕಲ್ಪಿಸಿದ ನಿವೃತ್ತ ಶಿಕ್ಷಕ, ಈ ಬಾರಿ ಸಂಸ್ಥೆಯಿಂದ ಸೇವಾಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀ ಯು.

ಯಕ್ಷಗಾನ ಕಲಾರಂಗದ 50ನೇ ಮನೆಗೆ ಶಿಲಾನ್ಯಾಸ. Read More »

ಯಕ್ಷಶಿಕ್ಷಣ ಶಾಲಾ ಮುಖ್ಯಶಿಕ್ಷಕರ ಸಮಾವೇಶ.

ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ, ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ 69 ಪ್ರೌಢಶಾಲೆಗಳ 70 ಪ್ರದರ್ಶನಗಳನ್ನು ನವೆಂಬರ್ 29, 2023ರಿಂದ ಜನವರಿ 05, 2024ರ ವರೆಗೆ ಬ್ರಹ್ಮಾವರ, ಉಡುಪಿ ರಾಜಾಂಗಣ, ಕಾಪು, ಶಿರ್ವ, ಮಣೂರು ಹಾಗೂ ಕುಂದಾಪುರದಲ್ಲಿ ಆಯೋಜಿಸಿದ್ದು, ಈ ಹಿನ್ನಲೆಯಲ್ಲಿ ಈ ಶಾಲೆಯ ಮುಖ್ಯಶಿಕ್ಷಕರ ಸಮಾಲೋಚನಾ ಸಭೆಯನ್ನು ಇಂದು (03.11.2023) ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಪಾಲ್ಗೊಂಡು ಶಾಲೆಯ

ಯಕ್ಷಶಿಕ್ಷಣ ಶಾಲಾ ಮುಖ್ಯಶಿಕ್ಷಕರ ಸಮಾವೇಶ. Read More »

ಬೈಂದೂರು ಶಾಸಕರಿಂದ ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ.

ಕುಂದಾಪುರ ಹೆಮ್ಮಾಡಿಯ ವಿದ್ಯಾಪೋಷಕ್ ವಿದ್ಯಾರ್ಥಿನಿ ಸಿಂಚನಾಳ (ಪ್ರಥಮ ಪಿಯುಸಿ) ಮನೆ ತೀರಾ ಜೀರ್ಣಾವಸ್ಥೆಯಲ್ಲಿದ್ದ ಹಿನ್ನಲೆಯಲ್ಲಿ ನೂತನ ಮನೆ ನಿರ್ಮಿಸಲಾಗುತ್ತಿದ್ದು, ಇಂದು (30.10.2023) ಬೈಂದೂರು ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಕ್ಷಗಾನ ಕಲಾರಂಗ ನಂಬಿಕಸ್ಥ ಸಂಸ್ಥೆಯಾಗಿದ್ದು, ನನ್ನ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ 4 ಮನೆಗಳ ವೆಚ್ಚವನ್ನು ದಾನಿಗಳ ನೆರವಿನಿಂದ ನೀಡಲು ಬದ್ಧನಾಗಿದ್ದೇನೆ. ತನ್ನ ಕ್ಷೇತ್ರದ ಒಟ್ಟು ಸಾಮಾಜಿಕ ಚಟುವಟಿಕೆಗಳ ಕೆಲಸಗಳಿಗೆ ಕಲಾರಂಗದ ತಂಡದ ನೆರವು ಅಗತ್ಯ. ಒಟ್ಟಾಗಿ ನೊಂದವರ ಬಾಳಿಗೆ ಬೆಳಕು

ಬೈಂದೂರು ಶಾಸಕರಿಂದ ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ. Read More »

ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ವಿನಮ್ರ ಸಹಾಧನ ವಿತರಣಾ ಸಮಾರಂಭ – 2023

ಪ್ರಾಮಾಣಿತೆ, ಸನ್ನಡತೆ, ವಿನಯಶೀಲತೆಯುಳ್ಳ ವಿದ್ಯಾರ್ಥಿ ಸಮಾಜಕ್ಕೆ ಆಸ್ತಿಯಾಗುತ್ತಾನೆ. ವಿದ್ಯಾರ್ಥಿಗಳು ಅನುಕರಣೆಯನ್ನಲ್ಲ ಅನುಸರಣೆಯನ್ನು ರೂಢಿಸಿಕೊಳ್ಳಬೇಕು ಎಂದು ಅಕ್ಟೋಬರ್ 1, 2023 ಭಾನುವಾರ ಕುಂದಾಪುರದ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಜರಗಿದ 18ನೆಯ ವರ್ಷದ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಶ್ರೀ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ನುಡಿದರು. ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಶ್ರೀರಮಣ ಉಪಾಧ್ಯ, ಡಾ. ಶರತ್

ವಿದ್ಯಾಪೋಷಕ ವಿದ್ಯಾರ್ಥಿಗಳಿಗೆ ವಿನಮ್ರ ಸಹಾಧನ ವಿತರಣಾ ಸಮಾರಂಭ – 2023 Read More »

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ.

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಈ ವರ್ಷದಿಂದ ಯಕ್ಷನಿಧಿಯ ಸದಸ್ಯ ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಆರಂಭಿಸಿದ್ದು, 24.09.2023ರಂದು ಆರ್ಥಿಕ ನೆರವಾಗಿ 48 ಕಲಾವಿದರ 54 ಮಕ್ಕಳಿಗೆ ರೂಪಾಯಿ 5,24,000/- ಸಹಾಯಧನವನ್ನು ವಿತರಿಸಿತು. ಕಲಾರಂಗದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಮಾತನಾಡಿದ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಲಾವಿದರು ಸಮಾಜದ ಆಸ್ತಿ, ಅವರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ ಹೊಣೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ಮಾಡುತ್ತಾ ಬಂದ

ಯಕ್ಷಗಾನ ಕಲಾವಿದರ ಮಕ್ಕಳಿಗೆ ವಿದ್ಯಾಪೋಷಕ್ ಸಹಾಯಧನ ವಿತರಣೆ. Read More »

We're currently hard at work gathering information and crafting content to bring you the best experience. Stay tuned for exciting updates!