







ವಿದ್ಯಾಪೋಷಕ್ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಮನ್ವಿತಾ (ಶ್ರೀಮತಿ ಯಶೋಧಾ ಮತ್ತು ದಿ. ರವಿ ಇವರ ಪುತ್ರಿ) ಇವಳಿಗೆ ಕಿರಿಮಂಜೇಶ್ವರದಲ್ಲಿ ಉಡುಪಿಯ ಡಾ. ಪಿ. ಎಸ್. ಗುರುಮೂರ್ತಿಯವರು ಅಗಲಿದ ತಮ್ಮ ತೀರ್ಥರೂಪರಾದ ಪಾದೆಬೆಟ್ಟು ಸುಬ್ರಹ್ಮಣ್ಯ ಭಟ್ ಇವರ ಜನ್ಮಶತಾಬ್ಧಿಯ ಪ್ರಯುಕ್ತ 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ‘ಸುವಸಂತಿ’ ಮನೆಯನ್ನು ಡಾ. ಗುರುಮೂರ್ತಿ ಮತ್ತು ಡಾ. ರಾಜೇಶ್ವರೀ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ 18.5.2025 ರಂದುತಮ್ಮಬದುಕಿನ ಅತ್ಯಂತ ಸಂಭ್ರಮದ ಕ್ಷಣವಿದು, ಇದು ತಂದೆಯ ಜನ್ಮಶತಾಬ್ಧಿಯ ದಿನವೇ ಕೂಡಿ ಬಂದಿರುವುದು ಧನ್ಯತೆ ತಂದಿದೆ ಎಂದರು. ಶ್ರೀಮತಿ ವಸಂತಿ.ಎಸ್.ಭಟ್ ಮಾತನಾಡಿ ತನ್ನ ಮಕ್ಕಳ ಸಾಧನೆ ಅಭಿಮಾನ್ನುಂಟುಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿ, ಮನ್ವಿತಾಳು ನನ್ನ ಮಕ್ಕಳಂತೆ ಮುಂದೆ ವೈದ್ಯಯಾಗಲಿ ಎಂದು ಬೆಂಗಳೂರಿನ ಖ್ಯಾತ ವೈದ್ಯರುಗಳಾದ ಡಾ. ಪಾದೆಬೆಟ್ಟು ಪದ್ಮನಾಭ ಭಟ್, ಡಾ. ಪಾದೆಬೆಟ್ಟು ಸೀತಾರಾಮ ಭಟ್ ಮಾತನಾಡಿ ಕಿರಿಯ ಸಹೋದರನ ಸಮಾಜ ಪ್ರೀತಿಯನ್ನು ಮೆಚ್ಚಿಕೊಂಡರು. ಬಾಲ್ಯದ ತಮ್ಮ ಕಷ್ಟದ ದಿನಗಳನ್ನೂ ತಂದೆತಾಯಿಗಳು ತಮಗೆ ನೀಡಿದ ಪ್ರೋತ್ಸಾಹ, ತಮ್ಮ ಕಠಿಣ ಪರಿಶ್ರಮ ಈ ಸಾಧನೆಗೆ ಕಾರಣ ಎಂಬುದನ್ನು ಸ್ಮರಿಸಿಕೊಂಡರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರುರಾಜ ಗಂಟಿಹೊಳೆಯವರು ಸುಬ್ರಹ್ಮಣ್ಯ ಭಟ್ಟರ ಕುಟುಂಬದ ಯಶೋಗಾಥೆ ವಿಸ್ಮಯ ಹುಟ್ಟಿಸಿದೆ. ಯಕ್ಷಗಾನ ಕಲಾರಂಗದ ಕೆಲಸ ಯಾರಿಂದಲೂ ನಕಲು ಮಾಡಲು ಅಸಾಧ್ಯ ಎಂದರು. ಯು.ಎಸ್.ರಾಜಗೋಪಾಲ ಆಚಾರ್ಯ, ಶ್ರೀ ಸೀತಾರಾಮ ಭಟ್ ಮಾತನಾಡಿ ಕಲಾರಂಗದ ಸಾಮಾಜಿಕ ಕಾಳಜಿ, ಡಾ. ಗುರುಮೂರ್ತಿ ದಂಪತಿಗಳ ಸಾಮಾಜಿಕ ಪ್ರೀತಿ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಪಾದೆಬೆಟ್ಟು ಶ್ರೀನಿವಾಸಮೂರ್ತಿ ಭಟ್, ಶ್ರೀಮತಿ ಪಾದೆಬೆಟ್ಟು ವಿಶಾಲಾಕ್ಷಿ ಪಾಡಿತ್ತಾಯ, ಶ್ರೀ ಸುಬ್ರಹ್ಮಣ್ಯ ಪಾಡಿತ್ತಾಯ, ಶ್ರೀಮತಿ ಜಾನಕಿ ರಾಮಕೃಷ್ಣ ರಾವ್,ಶ್ರೀಮತಿ ಪ್ರೇಮ ಶ್ರೀನಿವಾಮೂರ್ತಿ ಭಟ್,ಕಲಾರಂಗದ ಯು.ವಿಶ್ವನಾಥ ಶೆಣೈ, ಎಸ್.ವಿ.ಭಟ್, ಕೆ.ಸದಾಶಿವ ರಾವ್, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯ, ಎಚ್.ಎನ್.ವೆಂಕಟೇಶ್, ನಾಗರಾಜ ಹೆಗಡೆ, ವಿನೋದಾ.ಎಂ.ಕಡೆಕಾರ್, ಪ್ರಸನ್ನ ಹೆಗಡೆ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.