Yakshagana Kalaranga

ವಿದ್ಯಾಪೋಷಕ್‍ನ 69ನೇ ಮನೆ ಉದ್ಘಾಟನೆ.

ಯಕ್ಷಗಾನ ಕಲಾರಂಗ ಕಾರ್ಕಳ ತಾಲೂಕಿನ ರೆಂಜಾಳದ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಿಖಿತಾಳಿಗೆ ರೂಪಾಯಿ 6,00,000/- ವೆಚ್ಚದಲ್ಲಿ ಭೀಮ ಗೋಲ್ಡ್ ಪ್ರೈ.ಲಿ.ನ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ಮನೆ ‘ಗೋಕುಲ’ದ ಉದ್ಘಾಟನೆ 28.04.2025 ರಂದು ಜರಗಿತು. ಬೆಂಗಳೂರು ಭೀಮ ಗೋಲ್ಡ್ ಪ್ರೈ. ಲಿ.ನ ಕ್ಲಸ್ಟರ್ ಹೆಡ್ ಕಾರ್ತಿಕ್ ರಾವ್ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಯಕ್ಷಗಾನ ಕಲಾರಂಗ ಶಿಕ್ಷಣ ಮತ್ತು ಸಮಾಜಕ್ಕೆ ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಸೇವೆ ಎಲ್ಲ ಸಂಘಟನೆಗಳಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲೂ ನಮ್ಮ ಸಂಸ್ಥೆ ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಉಡುಪಿ ಭೀಮ ಗೋಲ್ಡ್ ಪ್ರೈ.ಲಿ.ನ ಅಧಿಕಾರಿಗಳಾದ ಗುರುಪ್ರಸಾದ್ ರಾವ್, ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ವಿಟ್ಲದ ಅನಂತಕೃಷ್ಣ ಹೆಬ್ಬಾರ್ ಮಾತನಾಡಿ ಈ ಸಂಸ್ಥೆಯ ಸದಸ್ಯನೆನ್ನಲು ನನಗೆ ಅಭಿಮಾನವೆನಿಸುತ್ತದೆ. ಇದರಿಂದ ಪ್ರೇರಣೆಗೊಂಡು ನನ್ನ ಶಿಷ್ಯನ ಸಹಾಯದಿಂದ ವಿಟ್ಲದಲ್ಲಿ ವಿದ್ಯಾರ್ಥಿಗಳಿಗೆ ಇದೇ ರೀತಿಯಲ್ಲಿ ಪ್ರತಿವರ್ಷ ಆರ್ಥಿಕ ನೆರವು ನೀಡುತ್ತಾ ಬಂದ ತೃಪ್ತಿ ನನಗಿದೆ ಎಂದರು. ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಸಾಮಾಜಿಕ ಸೇವಾಕರ್ತ ವಿಜಯ ಶೆಟ್ಟಿ, ಮನೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ರಾಜೇಶ್, ಸ್ಥಳೀಯರಾದ ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕೆ. ಸದಾಶಿವ ರಾವ್, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಗಣೇಶ್ ಬ್ರಹ್ಮಾವರ, ಎಚ್. ಎನ್. ವೆಂಕಟೇಶ್, ಹಾಗೂ ಕಿಶೋರ್ ಕನ್ನರ್ಪಾಡಿ ಪಾಲ್ಗೊಂಡರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!