







ವಿದ್ಯಾಪೋಷಕ್ ನ 65 ನೇ ಮನೆ ಉದ್ಘಾಟನೆ.
ಯಕ್ಷಗಾನ ಕಲಾರಂಗ ಬೀಜಾಡಿಯಲ್ಲಿ ವಿದ್ಯಾಪೋಷಕ್ ದ್ವಿತೀಯ. ಪಿ.ಯು. ವಿದ್ಯಾರ್ಥಿನಿ ಮಾನ್ಯಳಿಗೆ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ 23.02.2025 ರಂದು ಜರಗಿತು. ಸಾಲಿಗ್ರಾಮದ ಮಂಟಪ ರಾಮ ಉಪಾಧ್ಯ- ಫಣಿಯಮ್ಮ ದಂಪತಿಗಳ ನೆನಪಿನಲ್ಲಿ ಅವರ ಮೊಮ್ಮಕ್ಕಳು, ಮರಿಮಕ್ಕಳು ಸೇರಿ ಪ್ರಾಯೋಜಿಸಿದ ‘ಫಣಿರಾಮ’ ಮನೆಯನ್ನು ಮಂಟಪ ಶ್ರೀಮತಿ ಯಶೋಧಾ ಉಪಾಧ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ರಾಮ ಉಪಾಧ್ಯರ ಪುತ್ರಿ ಶ್ರೀಮತಿ ಸತ್ಯಭಾಮಾ ಮಯ್ಯರು ಉಪಸ್ಥತರಿದ್ದರು. ಡಾ. ರತ್ನಾಕರ ಉಪಾಧ್ಯರು ತಮ್ಮ ಅಜ್ಜ ರಾಮ ಉಪಾಧ್ಯರ ಶಿಸ್ತು, ಪ್ರಾಮಾಣಿಕತೆ, ಪರೋಪಕಾರಬುದ್ಧಿ ನಮಗೆಲ್ಲ ಸ್ಫೂರ್ತಿ ಮತ್ತು ಪ್ರೇರಕ ಶಕ್ತಿಯಾಗಿದೆ. ಅಜ್ಜ ಅಜ್ಜಿಯರ ಹೆಸರಿನಲ್ಲಿ ಮನೆ ನಿರ್ಮಿಸಿ ಯಕ್ಷಗಾನ ಕಲಾರಂಗದ ಮಹಾಯಜ್ಞದಲ್ಲಿ ಭಾಗಿಯಾಗುವ ಅವಕಾಶ ಮಂಟಪ ಕುಟುಂಬಕ್ಕೆ ಧನ್ಯತೆ ತಂದಿದೆ ಎಂದರು. ಮಂಟಪ ನಟರಾಜ ಉಪಾಧ್ಯ ಮತ್ತು ಶ್ರೀಮತಿ ವಿಜಯಲಕ್ಷ್ಮೀ ಮಾತನಾಡಿ ಯಕ್ಷಗಾನ ಕಲಾರಂಗ ಮಾಡುತ್ತಿರುವ ಕೆಲಸ ಊಹೆಗೂ ನಿಲುಕದ್ದು.ಸಮಾಜ ಮತ್ತು ಶಿಕ್ಷಣಕ್ಕೆ ಈ ಸಂಸ್ಥೆಯ ಕೊಡುಗೆ ಅನನ್ಯ ಎಂದು ಹರ್ಷ ವ್ಯಕ್ತಪಡಿಸಿದರು. ಬೀಜಾಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ವಿನೋದಾ ಎಂ. ಕುಮಾರಿ ಮಾನ್ಯಳ ನಿಯತ್ತಿನ ಕಲಿಕೆ, ಶಿಸ್ತು, ವಿಧೇಯತೆ ಅವಳ ಸಾಧನೆಗೆ ಕಾರಣ ಎಂದು ಹೇಳಿದರು.ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ವಾಸುದೇವ ಕಾರಂತ್ ಮತ್ತು ವಿವೇಕ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಜಗದೀಶ ನಾವುಡ ಶುಭಾಶಂಸನೆಗೈದರು.ಮಂಟಪ ಕುಟುಂಬದ ಸದಸ್ಯರಾದ ನಾಗರಾಜ ಉಪಾಧ್ಯ,ಡಾ.ಮನೋಹರ ಉಪಾಧ್ಯ,ಸುಪ್ರಭಾ ತಂತ್ರಿ,ವಾಣಿ,ಸಂಧ್ಯಾ, ಡಾ.ವಿದ್ಯಾ,ಡಾ.ಸುಧನ್ವ, ಜಗದೀಶ್ ರಾವ್, ಗಾಯತ್ರಿ,ಸಾತ್ವಿಕ್,ಮಂಟಪ ಸತೀಶ್ ಉಪಾದ್ಯ, ವತ್ಸಲಾ,ವರುಣ, ಗುರುಪ್ರಸಾದ್ ಉಪಾಧ್ಯ,ಹೇಮಾ,ವೈಶಾಲಿ ಹತ್ವಾರ್,ಪ್ರಕಾಶ ಹತ್ವಾರ್,ಶ್ರೀನಿವಾಸ ಉಪಾಧ್ಯ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ ಭಟ್, ಕೋಶಾಧಿಕಾರಿ ಪ್ರೊ.ಸದಾಶಿವ ರಾವ್ ಸದಸ್ಯರಾದ ವಿಜಯ ಕುಮಾರ್ ಮುದ್ರಾಡಿ, ನಟರಾಜ ಉಪಾಧ್ಯಾಯ, ಗಣಪತಿ ಭಟ್, ಸಮಾಜ ಸೇವಕ ವಿಠಲ ಕುಂದರ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ನಾರಾಯಣ ಎಂ.ಹೆಗಡೆ ವಂದಿಸಿದರು. ಎಚ್. ಎನ್.ಶೃಂಗೇಶ್ವರ್ ಸಹಕರಿಸಿದರು. ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.