Yakshagana Kalaranga

ವಿದ್ಯಾಪೋಷಕ್ ವಿದ್ಯಾರ್ಥಿಗಳ ಸಮಾಲೋಚನಾ ಸಭೆ.

ಇಂಜಿನೀಯರ್, ಸ್ನಾತಕೋತ್ತರ ಮತ್ತು ಇತರೆ ವಿಭಾಗಗಳಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿಗಳ ಒಂದು ದಿನದ ಸಮಾಲೋಚನಾ ಸಭೆಯು ದಿನಾಂಕ 28.07.2024 ರಂದು ಸಂಸ್ಥೆಯ ಐ.ವೈ.ಸಿ ಸಭಾಂಗಣದಲ್ಲಿ ಜರಗಿತು.ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಯು. ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು. ಸಮಾಲೋಚನಾ ಸಭೆಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಯು.ಸಿ.ನಿರಂಜನರ ನೇತೃತ್ವದ ತಂಡದಲ್ಲಿ ನಿವಿಯಸ್ ಸೊಲ್ಯೂಷನ್ಸ,ಉಡುಪಿ ಇದರ ಮೆನೇಜರ್ ಪವಿತ್ರಾ, MUTBI ಮಣಿಪಾಲ್‌ನ ಮ್ಯಾನೇಜರ್ ಮಲ್ಲೇಶ್ ಕುಮಾರ್ ಎಸ್., ಎಂ.ಐ.ಟಿಯ ಉಪನ್ಯಾಸಕರಾದ , ಚೇತನಾ ಪೂಜಾರಿ, ದುಂಡೇಶ್ ಚೈನಿವಾರ್ ಭಾಗವಹಿಸಿದ್ದರು. ಕೌಶಲಾಭಿವೃದ್ಧಿ, ಒತ್ತಡ ನಿವಾರಣೆ, ಸಮಯದ ಮಹತ್ವ, ರಕ್ಷಣಾ ಇಲಾಖೆಯಲ್ಲಿರುವ ಅವಕಾಶ, ಸ್ವಂತ ಉದ್ಯಮ ಆರಂಭಿಸುವವರಿಗಿರುವ ಸೌಲಭ್ಯಗಳ ಕುರಿತಂತೆ ಉಪಯುಕ್ತ ಮಾಹಿತಿ ಒದಗಿಸಿದರು. 200 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಶಿಬಿರದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಅಗತ್ಯ ಸೂಚನೆಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ್, ಗಣೇಶ್ ರಾವ್ ಎಲ್ಲೂರು ಸಹಕರಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!