ವಿದ್ಯಾಪೋಷಕ್ ಫಲಾನುಭವಿ ಪದವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಮಾವೇಶವು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಜೂನ್ 23ರಂದು ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎ.ಪಿ.ಭಟ್,ಡಾ.ಸಿ.ಕೆ. ಮಂಜುನಾಥ,ಪ್ರೊ.ಕೆ.ಸದಾಶಿವ ರಾವ್, ರತ್ನ ಕುಮಾರ್ ಮಕ್ಕಳಿಗೆ ಶೈಕ್ಷಣಿಕ ಮತ್ತು ಬದುಕಿಗೆ ಅಗತ್ಯದ ಸಲಹೆ ಮತ್ತು ಮಾರ್ಗದರ್ಶನದ ಮಾತುಗಳನ್ನಾಡಿದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಕಿವಿ ಮಾತು ಹೇಳಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಗತ್ಯದ ಸೂಚನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಯು.ಎಸ್.ರಾಜಗೋಪಾಲ ಆಚಾರ್ಯ, ಉಪಾಧ್ಯಕ್ಷ ವಿ.ಜಿ ಶೆಟ್ಟಿ,ನಾರಾಯಣ ಎಂ.ಹೆಗಡೆ, ಎಚ್. ಎನ್.ಶೃಂಗೇಶ್ವರ, ಅಶೋಕ.ಎಂ ಉಪಸ್ಥಿತರಿದ್ದರು.200 ವಿದ್ಯಾರ್ಥಿಗಳು ಭಾಗವಹಿಸಿದ್ದರು.