Yakshagana Kalaranga

ಸೇವಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ – 2024

ಮಧುಕರ ವೃತ್ತಿಯನ್ನು ರೂಢಿಸಿಕೊಳ್ಳಬೇಕು- ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು

ಯಕ್ಷಗಾನ ಕಲಾರಂಗದಲ್ಲಿ 27 ವರ್ಷಗಳ ಕಾಲ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ಸೇವಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ 24-02-2024 ರಂದು ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಜರಗಿತು. ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನಿವೃತ್ತ ಬ್ಯಾಂಕ್ ಅಧಿಕಾರಿ, ರಾಷ್ಟ್ರಪ್ರೇಮಿ, ಸಾವಯವ ಕೃಷಿಕ, ದೃಷ್ಟಿ ತೊಡಕನ್ನು ಮೀರಿನಿಂತ ಸಾಧಕ ಶ್ರೀ ಪಿ. ಪಾಂಡುರಂಗ ಶಾನುಭಾಗ್ ಇವರಿಗೆ ಪ್ರದಾನ ಮಾಡಿ, ಶಾನುಭಾಗರು ಮಧುಕರದಂತೆ ಬದುಕಿದವರು. ಹೇಗೆ ಜೇನುನೊಣ ಎಲ್ಲ ರುಚಿಯ ಹೂವುಗಳನ್ನು ಸಂಗ್ರಹಿಸಿ ಸಿಹಿಯನ್ನು ಕೊಡುವಂತೆ ಇವರು ಬದುಕಿನಲ್ಲಿ ಬಂದ ಸ್ತುತಿ-ನಿಂದೆಗಳಿಗೆ ಕಿವಿಕೊಡದೆ ಪ್ರೀತಿಯನ್ನು ಹಂಚಿದವರು. ನಿಶ್ಚಿಂತೆಯಿಂದ ಬದುಕುವವರಿಗೆ ಅವರು ನಿದರ್ಶನಪ್ರಾಯರಾಗಿದ್ದಾರೆ ಎಂದರು. ಪ್ರಶಸ್ತಿ ಸ್ವೀಕರಿಸಿದ ಪಾಂಡುರಂಗರು ಕಲಾರಂಗ ನೀಡಿದ ಪ್ರಶಸ್ತಿಯನ್ನು ವಿನಮ್ರನಾಗಿ ಸ್ವೀಕರಿಸಿದ್ದೇನೆ, ಸಮಾಜದ ಒಳಿತಿಗೆ ಕೆಲಸ ಮಾಡುವವರಿಗೆ ಇದು ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಪಿಎಚ್.ಡಿ ಪದವಿ ಪಡೆದ ರಂಗ ಸಾಧಕಿ ಡಾ. ಭ್ರಾಮರಿ ಶಿವಪ್ರಕಾಶ್ ಅವರನ್ನು ಗೌರವಿಸಲಾಯಿತು. ಪಾಂಡುರಂಗ ಶಾನುಭಾಗ್ ರ ವಿದ್ಯಾ ಗುರುಗಳಾದ ಮಧ್ವರಮಣ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಪ್ರಣಾದ್ ರಾವ್ ಪ್ರಾರ್ಥನೆಗೈದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್ ಎಸ್. ಗೋಪಾಲಕೃಷ್ಣರ ಕುರಿತು ಸಂಸ್ಮರಣ ಭಾಷಣ ಮಾಡಿದರು. ನಾರಾಯಣ ಎಂ. ಹೆಗಡೆ ಪಾಂಡುರಂಗ ಶಾನುಭಾಗ್ ರನ್ನು ಸಭೆಗೆ ಪರಿಚಯಿಸಿದರು. ಹೆಚ್.ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!